ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ 1947 ರಲ್ಲಿ ಸ್ಥಾಪಿಸಲ್ಪಟ್ಟ ಕೆನರಾ ಕಾಲೇಜು ಸೊಸೈಟಿಯು ಕಾಲೇಜು ಶಿಕ್ಷಣದಲ್ಲಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪ್ರಶಿಕ್ಷಣ ಮಹಾವಿದ್ಯಾಲಯವನ್ನು ಆರಂಭಿಸಿ ಕೀರ್ತಿ ಹಾಗೂ ಹೆಸರನ್ನು ಗಳಿಸಿ ತದನಂತರ ಜಿಲ್ಲೆಯಲ್ಲಿ ಅವಶ್ಯವಿರುವ ತಾಂತ್ರಿಕ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು 1985 ರಲ್ಲಿ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಿತು. ಇದು ಇದರ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಮುತ್ತನ್ನು ಅಳವಡಿಸಿದಂತಾಯಿತು ಈ ಸಂಸ್ಥೆಯು ಸುಂದರ ಪರಿಸರ ಮತ್ತು ಆವರಣವನ್ನು ಹೊಂದಿರುವುದು ಶಿಕ್ಷಣಕ್ಕೆ ಪ್ರಾಶಸ್ತ್ಯ ಸ್ಥಳವಾಗಿದೆ. Read More...

We pledge to position India as a Vishwa Guru in Ariticial Intelligence, leading innovation, ethics, and education, fullfilling our Prime Minister's Vision.
Notices & Circulars

ದೂರದೃಷ್ಟಿ(Vision)

  • ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯಮವಲಯದ ಬೇಡಿಕೆಗೆ ಅನುಗುಣವಾಗಿ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡಲು ಪೂರಕವಾದ ಮೂಲಭೂತ ಸೌಕರ್ಯಗಳನ್ನು ನೀಡಿ ಮಹೋನ್ನತ ತಂತ್ರಜ್ಞರನ್ನು ರೂಪಿಸಿ ಉತ್ತಮ ಶ್ರೇಣಿಯ ಸಂಸ್ಥೆಯನ್ನಾಗಿಸಿ  ಬೆಳೆಸುವುದು.

  ನಿರ್ದಿಷ್ಟ ಪಡಿಸಿದ ಗುರಿ (Mission)

  • ಪ್ರಸ್ತುತ ವಿದ್ಯಾರ್ಥಿಗಳಿಗೆ ಅವಶ‍್ಯವಿರುವ ತಾಂತ್ರಿಕ ಕೌಶಲ್ಯಗಳನ್ನು ಒದಗಿಸಿ ಸಮಾಜದ ಅವಶ‍್ಯಕತೆಗೆ ತಕ್ಕಂತೆ ನೈತಿಕ ಮೌಲ್ಯಯುತ ಜವಾಬ್ದಾರಿಯುತ ವೃತ್ತಿ ನಿರತರನ್ನಾಗಿ ರೂಪಿಸುವುದು.

  • ವಿದ್ಯಾರ್ಥಿಗಳಿಗೆ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸೂಕ್ತ ಯೋಜನೆಯ ಮೂಲಕ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಜಾಗೃತೆ ಮೂಡಿಸುವುದು.

  • ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ ಬಗ್ಗೆ ಗೌರವ ಬೆಳೆಸಿಕೊಳ್ಳಲು ಮತ್ತು ಕರ್ತವ್ಯವನ್ನು ನಿಭಾಯಿಸಲು ಅರಿವು ಮೂಡಿಸಿ ಉತ್ತಮ ನಾಗರಿಕರಾಗಲು ಪ್ರೇರೇಪಿಸುವುದು.

ಕೋರ್ಸುಗಳ ವಿವರ:-

ಅ.ನಂ. ಕೋರ್ಸು ವಿವರ ಇಂಟೇಕ್ ಮಿತಿ
1 ಮೆಕ್ಯಾನಿಕಲ್ ಇಂಜನೀಯರಿಂಗ್ (ಜನರಲ್) 54
2 ಸಿವಿಲ್ ಇಂಜನೀಯರಿಂಗ್ 41
3 ಇಲೆಕ್ಟ್ರಾನಿಕ್ಸ & ಕಮ್ಯುನಿಕೇಶನ್ ಇಂಜನೀಯರಿಂಗ್ 54
4 ಕಂಪ್ಯೂಟರ್ ಸಾಯಿನ್ಸ & ಇಂಜನೀಯರಿಂಗ್ 54
5 ಅಟೊಮೋಬೈಲ್ ಇಂಜನೀಯರಿಂಗ್ 27

 

ವರ್ತಮಾನ ವಿಷಯಗಳು
As part of Student Induction Programme, Parents' Meet was arranged with parents of First semester Electronics & Communications Engineering students (01st July 2026).

34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ದಿನಾಂಕ: 30-06-2026ರಂದು ಸೇವಾನಿವೃತ್ತರಾದ ಶ್ರೀ ಸೂರ್ಯಕಾಂತ ಹೆಗಡೆ, , ಆಯ್ಕೆ ಶ್ರೇಣಿ ಉಪನ್ಯಾಸಕರು, ಮೆಕಾನಿಕಲ್‌ ಇಂಜನಿಯರಿಂಗ್‌ ವಿಭಾಗ, ಇವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

ಉತ್ತರಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಜೊತೆಯಲ್ಲಿ "ಸಸಿ ನೆಡು" ಕಾರ್ಯಕ್ರಮವನ್ನು ಆಚರಿಸಲಾಯಿತು (30-06-2026)

As part of Student Induction Programme, Parents' Meet was arranged with parents of First semester Automobile Enginering and First Semester Civil Engineering students (30th June 2026).

As part of Student Induction Programme, Parents' Meet with parents of First semester Mechanical Engineering students (29th June 2026).

ಅಂತರಾರಷ್ಟ್ರೀಯ ಯೋಗ ದಿನಾಚರಣೆ (21-06-2026)

ನಮ್ಮ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ದಿನಾಂಕ: 30-05-2026ರಂದು ಸೇವಾನಿವೃತ್ತರಾದ ಶ್ರೀ ಗಜಾನನ ಆರ್‌. ಶಾನಭಾಗ, , ಗ್ರಂಥಪಾಲಕರು, ಇವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

SEMIKRON DANFOSS ಸಂಸ್ಥೆಯವರು CSR ಅನುದಾನದಡಿಯಲ್ಲಿ ನಮ್ಮ ಸಂಸ್ಥೆಗೆ ಕೊಡುಗೆಯಾಗಿ ನೀಡಲ್ಪಟ್ಟ ಸೌರಫಲಕಗಳ ಮೇಲ್ಛಾವಣಿ ಮತ್ತು ಡಿಜಿ ಸೆಟ್‌ಗಳನ್ನು ದಿನಾಂಕ 05-05-2026 ರಂದು ಶ್ರೀ ಶರದ್‌ ಯಶವಂತ ಶಾನಭಾಗ, MD & Head of Sales-India, Semikron Danfoss ಇವರು ಉದ್ಘಾಟಿಸಿದರು.

28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ದಿನಾಂಕ: 30-04-2026ರಂದು ಸೇವಾನಿವೃತ್ತರಾದ ಶ್ರೀ ಸುಬ್ರಹ್ಮಣ್ಯ ಭಟ್‌ , ಪ್ರಭಾರ ಕಛೇರಿ ಅಧೀಕ್ಷಕರು, ಇವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

Kokan Railways Corporation Limited, Karwar Division ಇವರು Corporate Social Responsibility ಅಂಗವಾಗಿ ನಮ್ಮ ಸಂಸ್ಥೆಗೆ 2 ಆಧುನಿಕ ಪರ್ಸನಲ್‌ ಕಂಪ್ಯೂಟರ್‌ಗಳು ಮತ್ತು 1 ಪ್ರಿಂಟರ್‌ನ್ನು ದೇಣಿಗೆಯಾಗಿ ನೀಡಿದರು. ಇವುಗಳನ್ನು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಲಿದ್ದಾರೆ.

18-03-2026 ರಂದು ನಮ್ಮ ವಿದ್ಯಾಲಯದಲ್ಲಿ "ವಾರ್ಷಿಕ ಸ್ನೇಹ ಸಮ್ಮೇಳನ-2026" ಆಚರಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು

18-03-2026 ರಂದು ನಮ್ಮ ವಿದ್ಯಾಲಯದಲ್ಲಿ "ವಾರ್ಷಿಕ ಸ್ನೇಹ ಸಮ್ಮೇಳನ-2026" ಆಚರಿಸಲಾಯಿತು. ಬೆಳಗಿನ ಅವಧಿಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

10-03-2026ರಂದು ನಮ್ಮ ವಿದ್ಯಾಲಯದ "ಯೂತ್‌ ರೆಡ್‌ ಕ್ರಾಸ್‌ ಘಟಕ" ಹಾಗೂ "ಸರ್ಕಾರಿ ಆರೋಗ್ಯ ಕೇಂದ್ರ, ಕುಮಟ" ಇವರ ಸಹಯೋಗದೊಂದಿಗೆ ನಮ್ಮ ವಿದ್ಯಾಲಯದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಹೀಮೋಗ್ಲೋಬಿನ್‌ ಪರೀಕ್ಷೆ ನಡೆಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ರಕ್ತಹೀನತೆಯ ಪ್ರಭಾವ ಮತ್ತು ಆರೋಗ್ಯಕರ ಆಹಾರದ ಬಗ್ಗೆ ಮಾಹಿತಿ ನೀಡಲಾಯಿತು.

10-03-2026ರಂದು ನಮ್ಮ ವಿದ್ಯಾಲಯದ "ಯೂತ್‌ ರೆಡ್‌ ಕ್ರಾಸ್‌ ಘಟಕ" ಹಾಗೂ "ಸರ್ಕಾರಿ ಆರೋಗ್ಯ ಕೇಂದ್ರ, ಕುಮಟ" ಇವರ ಸಹಯೋಗದೊಂದಿಗೆ ನಮ್ಮ ವಿದ್ಯಾಲಯದಲ್ಲಿ ವಿಶೇಷ ರಕ್ತದಾನ ಶಿಬಿರ ಎರ್ಪಡಿಲಾಯಿತು

10-03-2026ರಂದು ಕರ್ಣಾಟಕ ಬ್ಯಾಂಕ್ ಹಾಗೂ ಸವಿ ಫೌಂಡೇಶನ್‌, ಮೂಡಬಿದರೆ ಇವರ ಸಹಯೋಗದೊಂದಿಗೆ ನಮ್ಮ ವಿದ್ಯಾಲಯದಲ್ಲಿ, ಲಾಭದಾಯಕ ಕೃಷಿಯ ಬಗೆಗಿನ ಮಾಹಿತಿಯನ್ನು "ಕೃಷಿ-ಖುಷಿ" ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಯಿತು

ಮೂರು ದಶಕಗಳಿಗೂ ಮೀರಿ ಸೇವೆ ಸಲ್ಲಿಸಿ ದಿನಾಂಕ: 28-02-2026ರಂದು ಸೇವಾನಿವೃತ್ತರಾದ ಶ್ರೀ ಗಣೇಶ ಎಂ. ಪಟಗಾರ , ಸಹಾಯಕರು ಇವರಿಗೆ ಸಂಸ್ಥೆಯ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

A "Workshop on Semicoductors" was conducted for two days from 11-02-2026 to 12-02-2026 by C.T.D.I., Bangalore for the students of Electronics and Communication Engineering Department.

ದಿನಾಂಕ 26-01-2026ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ NCC Cadet ಆದ, ಸಿವಿಲ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಕು. ರಿಷಿ ಸುಬ್ಯಹ್ಮಣ್ಯ ನಾಯ್ಕನನ್ನು ಮೆರವಣಿಗೆ ಮೂಲಕ ಹಾರ್ದಿಕ ಸ್ವಾಗತ ನೀಡಲಾಯಿತು.

Participated in Celebration of Republic Day held at Manaki Ground at 9.00AM on 26th January 2026

Celebrated Republic Day at our Institute on 26th January 2026

Congratulations to our final year Civil Engineering student, Rishi Subramanya Naik, for participating in the Republic Day Parade at New Delhi.

Four NSS volunteers of our Institute participated in National Integration Camp held at Hassan from 5th to 11th January 2026

ಶ್ರೀ ವಿವೇಕಾನಂದರ ಜಯಂತಿ ಆಚರಣೆ (12-01-2026)