ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್ಗಳ ಸಿಬ್ಬಂದಿಗಳಿಗೆ ಎರಡು ದಿನಗಳ (6-12-2019, 7-12-2019) ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಈ ಪಂದ್ಯಾವಳಿಯನ್ನು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಫಿಟ್ ಇಂಡಿಯಾ ಅಭಿಯಾನ" (Fit India Movement)ದಡಿಯಲ್ಲಿ, ತಾಂತ್ರಿಕ ಶಿಕ್ಷಣ ಮಂಡಳಿ, ಬೆಂಗಳೂರು ಇವರಿಂದ ವಿಶೇಷ ಅನುಮತಿಯನ್ನು ಪಡೆದುಕೊಂಡು ಆಯೋಜಿಸಲಾಗಿದೆ.
ಆಮಂತ್ರಣ ಪತ್ರಿಕೆ
ತಾಂತ್ರಿಕ ಶಿಕ್ಷಣ ಮಂಡಳಿ, ಬೆಂಗಳೂರು ಇವರು ಪಂದ್ಯಾವಳಿಗೆ ಸಂಬಂಧಪಟ್ಟಂತೆ ನೀಡಿದ ಸುತ್ತೋಲೆ.
(ಸುತ್ತೋಲೆಯ ಜಾಲಕೊಂಡಿ : )
ಪಂದ್ಯಾವಳಿಯ ಕುರಿತು ದಿನಾಂಕ 04-12-2019 ಸಾಯಂಕಾಲ 04ಗಂಟೆಗೆ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ಕುರಿತು ಸ್ಥಳೀಯ ವಿಡಿಯೋ ವಾಹಿನಿಯಾದ "ವಿಸ್ಮಯ 24x7 ಚಾನೆ" ಇವರು ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿರುತ್ತಾರೆ.
(ವಿಡಿಯೋ ವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ)